Slide
Slide
Slide
previous arrow
next arrow

ಮಾರಿಜಾತ್ರೆ: ಮೂರ್ತಿ‌ ಕೆತ್ತನೆ ಮೂಲಕ ಧಾರ್ಮಿಕ ವಿಧಿವಿಧಾನಕ್ಕೆ ಚಾಲನೆ

300x250 AD

ಭಟ್ಕಳ: ತಾಲೂಕಿನ ಬೆಳಕೆ ಗರಡಿಹಿತ್ಲುವಿನ ಶ್ರೀಧರ ನಾಯ್ಕ ಮನೆಯಲ್ಲಿ ಮಾರಿ ಮರಕ್ಕೆ ಪೂಜೆ ಸಲ್ಲಿಸಿ ಮರ ಕತ್ತರಿಸುವ ಮೂಲಕ ಮಾರಿ ಜಾತ್ರೆಗೆ ಮೂರ್ತಿ ಕೆತ್ತನೆಯ ಮೂಲಕ ಧಾರ್ಮಿಕ ವಿಧಿ ವಿಧಾನಕ್ಕೆ ಮಂಗಳವಾರದಂದು ಚಾಲನೆ ನೀಡಲಾಯಿತು.

ದೇವಸ್ಥಾನದ ಆಡಳಿತ ಕಮಿಟಿ ಮುಖ್ಯಸ್ಥರನೊಳಗೊಂಡಂತೆ ಸ್ಥಳೀಯರು ಹಾಗೂ ಮಾರಿ ಮೂರ್ತಿ ಮರವನ್ನು ನೀಡಿದ ಕುಟುಂಬದವರ ಸಮ್ಮುಖದಲ್ಲಿ ಮಾರಿ ಮೂರ್ತಿ ತಯಾರಕರಾದ ಮಾರುತಿ ಆಚಾರಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮರವನ್ನು ಕತ್ತರಿಸಿ ಮೂರ್ತಿ ತಯಾರಿಗೆ ಸಿದ್ಧತೆ ಮಾಡಿಕೊಂಡರು.

ಸುಮಾರು 25 ವರ್ಷದ ಹುಳಿ ಅಮಟೆ ಮರ ಇದಾಗಿದೆ. ವರ್ಷಂಪತ್ರಿಯಂತೆ ಇಲ್ಲಿನ ಮಣ್ಕುಳಿಯ ಹೊನ್ನಯ್ಯನ ಮನೆ ಕುಟುಂಬಸ್ಥರು ಈ ಮರವನ್ನು ಕಡಿದು ಮಾರಿ ಮೂರ್ತಿ ತಯಾರಕರಾದ ಆರ್ಚಾರರಿಗೆ ಒಪ್ಪಿಸುತ್ತಾರೆ. ಬಳಿಕ ಶುಕ್ರವಾರ ತನಕ ಮಾರಿ ಮೂರ್ತಿ ಬಿಂಬವನ್ನು ಅಲ್ಲಿಯೇ ತಯಾರಿಸಿ ಬಳಿಕ ಶುಕ್ರವಾರ ಸಂಜೆ ವಿಶೇಷ ಪೂಜೆ ಸಲ್ಲಿಸಿ ಊರಿನ ಮುತ್ತೈದೆಯರು ಮೂರ್ತಿಗೆ ಉಡಿ ತುಂಬಿ ಸಂಪ್ರದಾಯಬದ್ಧವಾಗಿ ಮಾರಿ ಮೂರ್ತಿ ತಯಾರಿಗೆ ಸಿದ್ಧಗೊಳ್ಳುತ್ತದೆ. ನಂತರ ಅಲ್ಲಿಂದ ಮೂರ್ತಿ ತಯಾರಿಕೆ ಕೆಲಸವನ್ನು ಆಚಾರ್ಯರ ಮನೆಯಲ್ಲಿ ನಡೆಯಲಿದೆ. ಇದೆ ದಿನ ಮಂಗಳವಾರದಂದು ರಾತ್ರಿ ಮೂರ್ತಿ ತಯಾರಕ ವಿಶ್ವಕರ್ಮ ಸಮಾಜದವರಿಂದ ತವರು ಮನೆಯ ವಿಶೇಷ ಪೂಜೆಯನ್ನು ನೆರವೆರಿಸಲಿದ್ದಾರೆ. ಆ ಬಳಿಕ ಮೂರ್ತಿಗೆ ವಿಶ್ವಕರ್ಮ ಮಹಿಳೆಯರಿಂದ ಸುಹಾಸಿನಿ ಪೂಜೆ, ಷೋಡಶೋಪಚಾರ ಪೂಜೆಯೂ ಸಹ ನಡೆಸಲಾಗುವುದು. ಪೂಜಾ ಸಮಯದಲ್ಲಿ ಅವರ ಸಮಾಜದ ಮಹಿಳೆಯರೊಬ್ಬರ ಮೇಲೆ ಮಾರಿ ದೇವಿ ಬರುತ್ತಾಳೆಂಬ ನಂಬಿಕೆ ಇದೆ. ನಂಬಿಕೆಯಂತೆ ಪೂಜೆಯ ವೇಳೆ ಮೈ ದರ್ಶನ ನಡೆಯುತ್ತದೆ. ನಂತರ ಮಹಾ ಮಂಗಳಾರತಿ ಪೂಜೆ ನಡೆಸಿ ಬುಧವಾರದಂದು ಮುಂಜಾನೆ 5.30 ಗಂಟೆಗೆ ಮಾರಿ ದೇವಿಯನ್ನು ವಿಶ್ವಕರ್ಮ ಸಮಾಜದವರು ಅದ್ದೂರಿ ಮೆರವಣಿಗೆಯ ಮೂಲಕ ಇಲ್ಲಿನ ಪೇಟೆ ರಸ್ತೆಯಲಿರುವ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಸಕಲ ಸಂಭ್ರಮದಿಂದ ವಿಶೇಷ ಆಕರ್ಷಣೆ, ಚಂಡೆ ವಾದ್ಯ, ನೃತ್ಯ ಕುಣಿತದೊಂದಿಗೆ ಕರೆತರಲಾಗುವುದು.

300x250 AD

ನಂತರ ಅದ್ದೂರಿಯಾಗಿ ಕರೆತರಲಾದ ಮಾರಿ ದೇವಿಯ ಮೂರ್ತಿಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಮಾರಿಕಾಂಬಾ ದೇವಿಯ ಎದುರಿಗೆ ಗರ್ಭಗುಡಿಯ ಹೊರಗಡೆ ಪ್ರತಿಷ್ಠಾಪನೆ ಮಾಡಿ ಪೂಜಾ ಕೌಂಕರ್ಯಗಳನ್ನು ನಡೆಸಲಾಗುವದು. ಆ ಮೂಲಕ ಎರಡು ದಿನಗಳ ಮಾರಿ ಜಾತ್ರಾ ಮಹೋತ್ಸವವೂ ಮಾರಿಗದ್ದುಗೆಯಲ್ಲಿ ಮಾರಿ ಮೂರ್ತಿಯನ್ನು ಪ್ರತಿಷ್ಟಾಪಿಸುವ ಮೂಲಕ ಚಾಲನೆಗೊಳ್ಳಲಿದೆ.

Share This
300x250 AD
300x250 AD
300x250 AD
Back to top